Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
SARFAESI ಕಾಯಿದೆಯಡಿ ನಡೆಸಲಾದ ಹರಾಜು ಮಾರಾಟದಲ್ಲಿ, SARFAESI ನಿಯಮಗಳ ನಿಯಮ 9ರಲ್ಲಿ ನಿಗದಿಪಡಿಸಿರುವ ಅವಧಿಯೊಳಗೆ ಉಳಿದ ಮಾರಾಟದ ಮೊತ್ತವನ್ನು ಪಾವತಿಸದಿದ್ದರೆ, ಆ ಹರಾಜು ಮಾರಾಟವನ್ನು ರದ್ದುಗೊಳಿಸಲು ಅರ್ಹವಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ಸಾಲಗಾರನು ಭದ್ರತಾ ಆಸ್ತಿಯನ್ನು ವಿಮೋಚನೆ (Redeem) ಮಾಡಿಕೊಳ್ಳಲು ನಿರಂತರವಾಗಿ ಮತ್ತು ಸದ್ಭಾವನೆಯಿಂದ (Bona Fide) ಮಾಡಿದ ಪ್ರಯತ್ನಗಳು ಮಹತ್ವದ ಪರಿಗಣನೆಗಳಾಗಿದ್ದು, ನ್ಯಾಯಾಲಯವು ಅವುಗಳನ್ನು ಸಮರ್ಪಕವಾಗಿ ಪರಿಗಣಿಸಬೇಕು. ಸರ್ವೋಚ್ಚ ನ್ಯಾಯಾಲಯ.
15-July-2026
ಭೂಸ್ವಾಧೀನ – ಸ್ವಾಧೀನಪಡಿಸಿಕೊಂಡ ಭೂಮಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸುವ ಸಂದರ್ಭದಲ್ಲಿ, ಅದೇ ಗ್ರಾಮದ ಸಮಕಾಲೀನ ಮಾರಾಟ ವ್ಯವಹಾರಗಳು ಅಥವಾ ಮಾದರಿ ದಾಖಲೆಗಳ ರೂಪದಲ್ಲಿನ ನೇರ ಸಾಕ್ಷ್ಯಗಳು ಲಭ್ಯವಿದ್ದಲ್ಲಿ, ಅಂತಹ ಸಾಕ್ಷ್ಯಗಳೇ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲು ಅತ್ಯಂತ ಅಪೇಕ್ಷಣೀಯ ಮತ್ತು ಆದ್ಯತೆಯ ಆಧಾರವಾಗಿರುತ್ತವೆ. ಕರ್ನಾಟಕ ಉಚ್ಚ ನ್ಯಾಯಾಲಯ.
14-July-2026
ಮೋಟಾರು ವಾಹನಗಳ ಕಾಯಿದೆ – ಬಡ್ಡಿಯ ಮಂಜೂರು. ಬಡ್ಡಿದರವನ್ನು ನಿರ್ಧರಿಸಲು ಯಾವುದೇ ನಿಗದಿತ ಅಥವಾ ಏಕರೂಪವಾದ ಸೂತ್ರವನ್ನು ಅನ್ವಯಿಸಲು ಸಾಧ್ಯವಿಲ್ಲವಾದರೂ, ಪ್ರಚಲಿತ ಬ್ಯಾಂಕ್ ಬಡ್ಡಿದರಗಳನ್ನು ಮಾರ್ಗದರ್ಶಕ ಅಂಶವಾಗಿ ಪರಿಗಣಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
14-July-2026
ನಿರ್ದಿಷ್ಟ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದ ದಾವೆ. ದಾವೆ ಸಲ್ಲಿಸಲು ನಿಗದಿಪಡಿಸಲಾದ ಮಿತಿಯ ಅವಧಿಯು ಮೂರು ವರ್ಷಗಳಾಗಿದ್ದರೂ, ಆ ಅವಧಿಯ ಕೊನೆಯ ಹಂತದವರೆಗೆ ಕಾಯುತ್ತಾ ದಾವೆದಾರನು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವುದು, ಒಪ್ಪಂದವನ್ನು ನೆರವೇರಿಸಲು ಅವನು ಸಿದ್ಧನಾಗಿದ್ದನೆಯೇ ಮತ್ತು ಇಚ್ಛಾಶಕ್ತಿಯನ್ನು ಹೊಂದಿದ್ದನೆಯೇ ಎಂಬುದನ್ನು ನಿರ್ಧರಿಸುವ ಸಂದರ್ಭದಲ್ಲಿ ಪರಿಗಣಿಸಬೇಕಾದ ಮಹತ್ವದ ಅಂಶವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
13-July-2026
ಬಹುಮಹಡಿ ಕಟ್ಟಡಗಳು, ಅವು ಸಾರ್ವಜನಿಕ ಸುರಕ್ಷತೆಗೆ, ವಿಶೇಷವಾಗಿ ಆ ಕಟ್ಟಡದ ನಿವಾಸಿಗಳು ಹಾಗೂ ಅದರ ಪಕ್ಕದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅಪಾಯವನ್ನು ಉಂಟುಮಾಡುವ ಪರಿಸ್ಥಿತಿಯಲ್ಲಿ, ಮುಂದುವರಿಯಲು ಅನುಮತಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
13-July-2026
ನಿರ್ದಿಷ್ಟ ತಡೆಯಾಜ್ಞೆ ಇಲ್ಲದಿರುವ ಸಂದರ್ಭದಲ್ಲಿ, ಕೇವಲ ನ್ಯಾಯಾಂಗ ಪ್ರಕ್ರಿಯೆಗಳು ಬಾಕಿಯಿರುವು ಕಾರಣದಿ0ದ ಶಾಸನಬದ್ಧ ಅಥವಾ ಆಡಳಿತಾತ್ಮಕ ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳನ್ನು ಪರಿಗಣಿಸಿದೆ ಇರುವುದು ಕಾನೂನು ಬಾಹಿರ. ಕರ್ನಾಟಕ ಉಚ್ಚ ನ್ಯಾಯಾಲಯ.
13-July-2026
ಕರ್ನಾಟಕ ಭೂ ಸುಧಾರಣಾ ಕಾಯ್ದೆ. ತಾನು ಭೂಮಿಯ ಗೇಣಿದಾರ ಎಂದು ಹಕ್ಕು ಪ್ರತಿಪಾದಿಸುವ ವ್ಯಕ್ತಿ, ಕಾನೂನಿನ ಪ್ರಕಾರ ಮಂಜೂರಿಗಾಗಿ ಸ್ವತಃ ಅರ್ಜಿ ಸಲ್ಲಿಸದಿದ್ದಲ್ಲಿ, ಸಮರ್ಥ ಪ್ರಾಧಿಕಾರವು ಮತ್ತೊಬ್ಬ ಗೇಣಿದಾರನಿಗೆ ಹಕ್ಕು ಮಂಜೂರು ಮಾಡಿದ ಆದೇಶವನ್ನು ಪ್ರಶ್ನಿಸಲು ಅಥವಾ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಯಾವುದೇ ಕಾನೂನುಬದ್ಧ ಹಕ್ಕು ಇರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-July-2026
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಯ ಅಡಿ ಹಿರಿಯ ನಾಗರಿಕನಾಗಿರುವ ತನ್ನ ಪತಿಯ ವಿರುದ್ಧ ಪತ್ನಿಯು ದೂರು ಸಲ್ಲಿಸಲು ಕಾನೂನುಬದ್ಧ ಹಕ್ಕನ್ನು ಹೊಂದಿರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-July-2026
ವರದಕ್ಷಿಣೆ ಸಾವು: ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304B ಅಥವಾ 498A ಯಲ್ಲಿರುವ ’ಸಂಬಂಧಿ’ ಎಂಬ ಪದವು ರಕ್ತಸಂಬಂಧ, ವಿವಾಹ ಸಂಬಂಧ ಅಥವಾ ದತ್ತು ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ಮಾತ್ರ ಸೂಚಿಸುತ್ತದೆ. ಈ ಕಾನೂನುಬದ್ಧ ವ್ಯಾಖ್ಯಾನದ ಪ್ರಕಾರ ಗಂಡನ ಸಂಬಂಧಿಯಾಗದ ವ್ಯಕ್ತಿಯ ವಿರುದ್ಧ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಕ್ರಿಮಿನಲ್ ಕ್ರಮ ಜರುಗಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-July-2026
ಮೇಲ್ಮನವಿ ಸಲ್ಲಿಸಲಾಗಿದೆ ಎಂಬ ಕಾರಣ ಮಾತ್ರದಿಂದಲೇ, ಆ ಮೇಲ್ಮನವಿಯಲ್ಲಿ ಪ್ರಶ್ನಿಸಲಾದ ಆದೇಶದ ಜಾರಿಗೆ ಸ್ವಯಂಚಾಲಿತವಾಗಿ ತಡೆ ಉಂಟಾಗುವುದಿಲ್ಲ. ಆ ಆದೇಶದ ಜಾರಿಗೆ ತಡೆ ನೀಡಬೇಕಾದರೆ, ಮೇಲ್ಮನವಿ ನ್ಯಾಯಾಲಯವು ಪ್ರತ್ಯೇಕವಾಗಿ ತಡೆಯಾಜ್ಞೆ ನೀಡಿರಬೇಕು. ಸರ್ವೋಚ್ಚ ನ್ಯಾಯಾಲಯ.
11-July-2026
ವೈಯಕ್ತಿಕ ಸ್ವಾತಂತ್ರ್ಯ: ಪೆರೋಲ್ ಮಂಜೂರಾದ ನಂತರ ಹಾಗೂ ನ್ಯಾಯಾಲಯದ ತೃಪ್ತಿಗೆ ತಕ್ಕಂತೆ ಜಾಮೀನುದಾರರನ್ನು ಒದಗಿಸಿದ ಬಳಿಕವೂ ಬಂಧಿತ ವ್ಯಕ್ತಿಯನ್ನು ಬಿಡುಗಡೆ ಮಾಡದಿದ್ದರೆ, ಅಂತಹ ಬಂಧನವು ಕಾನೂನುಬಾಹಿರ ಬಂಧನವಾಗುತ್ತದೆ. ಕಾನೂನುಬಾಹಿರವಾಗಿ ಬಂಧನಕ್ಕೊಳಗಾದ ವ್ಯಕ್ತಿಯು ತನ್ನ ಮೂಲಭೂತ ಹಕ್ಕಿನ ಉಲ್ಲಂಘನೆಗಾಗಿ ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ. ಸರ್ವೋಚ್ಚ ನ್ಯಾಯಾಲಯ
10-July-2026
ನಾಗರಿಕ ದಾವೆ ಪ್ರಕ್ರಿಯಾ ಸಂಹಿತೆಯ ಆದೇಶ 12 ನಿಯಮ 6ರ ಅಡಿಯಲ್ಲಿ, ಒಪ್ಪಿಗೆಯ ಆಧಾರದ ಮೇಲೆ ತೀರ್ಪು ಅಥವಾ ಡಿಕ್ರಿ ನೀಡಬೇಕಾದರೆ, ಪ್ರತಿವಾದಿಯ ಒಪ್ಪಿಗೆ ಸ್ಪಷ್ಟ ಹಾಗೂ ನಿಸ್ಸಂದಿಗ್ಧವಾಗಿರಬೇಕು. ಡಿಕ್ರಿಯನ್ನು ಕೇವಲ ಸ್ಪಷ್ಟ, ನಿರ್ವಿವಾದ, ಷರತ್ತುರಹಿತ, ಅಸಂದಿಗ್ಧ ಮತ್ತು ನಿಸ್ಸಂಶಯವಾದ ಒಪ್ಪಿಗೆಯಿದ್ದಾಗ ಮಾತ್ರ ನೀಡಬಹುದು. ಒಪ್ಪಿಗೆಯು ನಿಖರವಾಗಿರದಿದ್ದರೆ ಅಥವಾ ವಿವಾದಾತ್ಮಕ ವಾಸ್ತವಾಂಶಗಳು ವಿಚಾರಣೆಗೆ ಒಳಪಟ್ಟಿದ್ದರೆ, ನ್ಯಾಯಾಲಯವು ಆದೇಶ 12 ನಿಯಮ 6ರ ಅಡಿಯಲ್ಲಿ ಡಿಕ್ರಿ ನೀಡಲು ಸಾಧ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ
10-July-2026
««
«
1
...
7
8
9
10
11
...
102
»
»»